Previous ಲಿಂಗಾಯತರು *ಲಿಂಗವಂತ*ರು ನಿಮ್ಮನ್ನು ನೀವು ತಿದ್ದಿಕೊಳ್ಳಿ Next

ಲಿಂಗಾಯತರಲ್ಲಿ ದೇಹವೇ ದೇವಾಲಯ

*

ಉಳ್ಳವರು ಶಿವಾಲಯ ಮಾಡಿಹರು, ನಾನೇನ ಮಾಡಲಿ ಬಡವನಯ್ಯಾ

ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡಲಿ ಬಡವನಯ್ಯಾ,
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೆ ಹೊನ್ನ ಕಲಶವಯ್ಯಾ,
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. - ಬಸವಣ್ಣ ಸವಸ1/821

ಕಲ್ಲ ಮನೆಯ ಮಾಡಿ
ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದರೆ
ದೇವರೆತ್ತ ಹೋದರೋ
ಲಿಂಗ ಪ್ರತಿಷ್ಠೆಯ ಮಾಡಿದವಂಗೆ
ನಾಯಕ ನರಕ ಗುಹೇಶ್ವರ - ಅಲ್ಲಮಪ್ರಭು

ದೇಹವೇ ದೇವಾಲಯವಾಗಿದ್ದ ಮೇಲೆ
ಮತ್ತೆ ಬೇರೆ ದೇಗುಲಕ್ಕೆ ಎಡೆಯಾಡುವರಿಗೆ
ಏನ ಹೇಳುವೆನಯ್ಯ?
ಗುಹೇಶ್ವರ, ನೀ ಕಲ್ಲಾದೆಡೆ ನಾನೇನಪ್ಪೆನು? - ಅಲ್ಲಮಪ್ರಭು

ಮನುಷ್ಯರನ್ನು ದೇವರು ಕಾಪಾಡುತ್ತಾನೆನ್ನುವರು ಜನ! ಇನ್ನು ಕಾಪಾಡುವ ದೇವರೆ ಕಲ್ಲಾದರೆ ಆರಾಧಿಸುವ ಭಕ್ತನೇನಾದಾನು?
ಪರಿವಿಡಿ (index)
*
Previous ಲಿಂಗಾಯತರು *ಲಿಂಗವಂತ*ರು ನಿಮ್ಮನ್ನು ನೀವು ತಿದ್ದಿಕೊಳ್ಳಿ Next