Previous ಉರಿವ ಕಮಲ ಸಂಗನೆಂದಂತೆ ಎಂದನಾಗಿ Next

ಶಿವಲಿಂಗದೊಳಗಣ ಜಂಗಮಲಿಂಗ

ರಚನೆ: ಚೆನ್ನಬಸವಣ್ಣ

ರಾಗ: ಭೂಪಾಳಿ


ಏಕೆ ಕರೆದರೆ ನುಡಿಯೆ ಲೋಕಾಧಿನಾಯಕ ಪಿ।
ನಾಕಿ ಕೂಡಲ ಚೆನ್ನಸಂಗಮೇಶ್ವರ ಲಿಂಗವೆ || ಪ ||

ತರಳೆ ಪೊಂಬಟ್ಟಲೊಳು ಕ್ಷೀರವಿದೆ ಕೊಳ್ಳೆನಲು ।
ಕರವೆತ್ತಿ ಈಂಟಿದೆ ಕರುಣದಿಂದ
ಮರಳಿ ಹೇರೂರ ಹೆಣ್ಣಿನ ದೃಢಕೆ ನೀ ಮೆಚ್ಚಿ
ಹರುಷದಿಂ ಪುರುಷನ ರೂಪನು ಮಾಡಿದೆ ದೇವ ||೧||

ಅಷ್ಟದಿಕ್ಕುಗಳ ಪೊದಕೆಯ ಹೊದ್ದೆ-ಪರವೆಯರ
ಬಟ ಕುಚದೊಳು ಕರೆದೋಡೋ ಎಂದೆ ದೇವ||
ದೃಷ್ಟದಿಂ ಸೌಂದರಗೆ ನಂದಿಮುದ್ರೆಯ ಹೊನ್ನ
ಕೊಟ್ಟೆ ಮೂಲೋಕವರಿಯೆ ದೇವ || ೨ ||

ಬಾಣ ಮಯೂರನುದ್ಭಟದೇವ ಮಲುಹಣಗೆ
ಕಾಳಿದಾಸಂಗಭೀಷವನಿತೆ ದೇವ
ಪ್ರಾಣೇಶ ಕಾರುಣ್ಯ ಸಿಂಧು ಸಲಹೆನ್ನ | ಪ್ರ
ವೀಣ ಕೂಡಲ ಚೆನ್ನಸಂಗಮೇಶ್ವರ ಲಿಂಗವೆ || ೩||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಉರಿವ ಕಮಲ ಸಂಗನೆಂದಂತೆ ಎಂದನಾಗಿ Next