Previous ಜಾತಿವಿಡಿದು ನೆನೆವರೆ ನಮ್ಮ ನೀತಿಯುಳ್ಳ ಶರಣರ? ಅಂತ್ಯ ಪ್ರಸಾದಿ Next

ಯತೋ ವಾಚೋ ನಿವರ್ತಂತೇ ಶ್ರುತಿ ಬಸವ

ರಚನೆ: ಶ್ರೀ ಗುರು ಚೆನ್ನಬಸವಣ್ಣನವರು


ಯತೋ ವಾಚೋ ನಿವರ್ತಂತೇ ಶ್ರುತಿ ಬಸವ
ಏಕೋ ಗುರುಬಸವ ನಾದ್ವಿತೀಯ |ಪ|

'ಬ'ಕಾರ ಭವವಿನಾಶ ನೀ ಬಸವ
'ಸ'ಕಾರ ಚೈತನ್ಯ ಆತ್ಮ ನೀ ಬಸವ
'ವ'ಕಾರ ಚರಜಂಗಮ ನೀ ಬಸವ
ಏಕೋಗುರು ತ್ರಿವಿಧರೂಪ ನೀನೆ ಬಸವ |1|

ಅಕಾರನಾದ ಉಕಾರ ಬಿಂದು ಬಸವ
ಮಕಾರ ಕಳೆ ತ್ರಿವಿಧರೂಪ ನೀ ಬಸವ
ಓಂಕಾರ ಪ್ರಣವರೂಪ ನೀ ಬಸವ
ನಾಗೇಶನಮಿತ ಚರಣ ನೀ ಬಸವ |2|

ವಿಶ್ವನಾಮ ಆಘವಿದೂರ ನೀ ಬಸವ
ವಿಶ್ವತೋಮುಖ ಅನಾದಿ ರೂಪ ನೀ ಬಸವ
ಸತ್ಯಜ್ಞಾನಿ ವಿಶ್ವರೂಪ ನೀ ಬಸವ
ವಿಶ್ವವಿಭೂತಿ ಸುಜ್ಞಾನಿಯೇ ಬಸವ |3|

ಭಕ್ತಿ ಯುಕ್ತಿ ಮುಕ್ತಿ ಶಕ್ತಿ ನೀ ಬಸವ
ಸತ್ಯ ನಿತ್ಯ ಕರ್ತೃ ನೀನೆ ಗುರುಬಸವ
ಅತ್ಯಧಿಕ ಮೃತ್ಯು ದೂರ ನೀ ಬಸವ
ಅತ್ಯತಿಷ್ಠದ್ದಂಶಾಂಗುಲ ನೀ ಬಸವ |4|

ಶರಣ ಜನರ ಕಾಮಧೇನುವೆ ನೀ ಬಸವ
ಶರಣ ಜನರ ಕಲ್ಪತರುವೆ ಗುರುಬಸವ
ಶರಣ ಜನರ ಭಕ್ತಿನಿಧಿಯೆ ಶ್ರೀ ಬಸವ
ಶರಣು ಕೂಡಲಚನ್ನಸಂಗನ ಬಸವ |5|

- ಶ್ರೀ ಗುರು ಚೆನ್ನಬಸವಣ್ಣನವರು.

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಜಾತಿವಿಡಿದು ನೆನೆವರೆ ನಮ್ಮ ನೀತಿಯುಳ್ಳ ಶರಣರ? ಅಂತ್ಯ ಪ್ರಸಾದಿ Next