Previous ಐವತ್ತಕ್ಷರ ಕರ್ಮ Next

ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ ಪ್ರಾಣಿಗಳು

ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ ಪ್ರಾಣಿಗಳು

ಜೈನರ ಪ್ರಕಾರ, ಇಂದ್ರಿಯಗಳ ಸಂಖ್ಯೆಯ ಆಧಾರದ ಮೇಲೆ ಪ್ರಾಣಿಗಳನ್ನು ವರ್ಗಿಕರಿಸಲಾಗಿದ್ದು, ವಚನಕಾರರು ಆ ತತ್ವವನ್ನು ಒಪ್ಪಿಕೊಂಡಂತೆ ಕಾಣುತ್ತದೆ. ಈ ತತ್ವದ ಪ್ರಕಾರ, ಪ್ರಾಣಿಗಳನ್ನು ಹೀಗೆ ವರ್ಗಿಕರಿಸಲಾಗಿದೆ :

೧. ಒಂದೇ ಇಂದ್ರಿಯವನ್ನುಳ್ಳ ಪ್ರಾಣಿಗಳು : ಏಕಾಣು ಜೀವಿಗಳಿಗೆ ಕೇವಲ ಸ್ಪರ್ಶನೇಂದ್ರಿಯವೊಂದೇ ಇದ್ದು, ಉಳಿದ ಯಾವ ಇಂದ್ರಿಯಗಳಿಲ್ಲ.

೨. ಹುಳಗಳು, ಶಂಖದ ಹುಳ, ಜಿಗಣೆ ಮುಂತಾದ ಪ್ರಾಣಿಗಳಿಗೆ ಸ್ಪರ್ಶನೇಂದ್ರಿಯ ಮತ್ತು ಘ್ರಾಣೇಂದ್ರಿಯ ಎಂಬ ಎರಡೇ ಇಂದ್ರಿಯಗಳಿರುತ್ತವೆ.

೩. ತಿಗಣೆ, ಹೇನು, ಇರುವೆ, ದೀಪದ ಹುಳಗಳು, ಮುಂತಾದ ಪ್ರಾಣಿಗಳಿಗೆ ಸ್ಪರ್ಶನೇಂದ್ರಿಯ, ಘ್ರಾಣೇಂದ್ರಿಯ ಮತ್ತು ನಯನೇಂದ್ರಿಯ ಎಂಬ ಮೂರು ಮಾತ್ರ ಇಂದ್ರಿಯಗಳಿರುತ್ತವೆ.

೪. ಜೇನುಹುಳ, ನೊಣ, ಸೊಳ್ಳೆ, ಮುಂತಾದ ಜೀವಿಗಳಿಗೆ ಘ್ರಾಣೇಂದ್ರಿಯ, ನಯನೇಂದ್ರಿಯ, ಶ್ರೋತೇಂದ್ರಿಯ ಮತ್ತು ರಸನೇಂದ್ರಿಯ ಎಂಬ ನಾಲ್ಕು ಇಂದ್ರಿಯಗಳಿದ್ದು ಅದಕ್ಕೆ ತ್ವಗಿಂದ್ರಿಯ (ಸ್ಪರ್ಶನೇಂದ್ರಿಯ) ಇರುವುದಿಲ್ಲ.

೫. ಮೀನು, ಮೊಸಳೆ, ಹಸುಗಳಂಥ ಚತುಷ್ಪಾದಿ, ಹಕ್ಕಿ, ಕೋತಿ, ಮನುಷ್ಯ ಈ ಎಲ್ಲ ಪ್ರಾಣಿಗಳಿಗೆ ಮೇಲೆ ಹೇಳಿದ ಐದೂ ಇಂದ್ರಿಯಗಳಿರುತ್ತವೆ. ಕಡಿಮೆ ಇಂದ್ರಿಯಗಳಿರುವುದು ಪ್ರಾಣಿ ವರ್ಗದ ಕೆಳ ಅಂತಸ್ತನ್ನು ತೋರಿಸಿದರೆ, ಹೆಚ್ಚು ಇಂದ್ರಿಯಗಳಿರುವುದು ಪ್ರಾಣಿಗಳು ಹೆಚ್ಚು ವಿಕಾಸವಾಗಿರುವುದರ ದ್ಯೋತಕವಾಗಿದೆ.

ಇಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯ ಇಂದ್ರಿಯಗಳನ್ನುಳ್ಳ ಮಾನವನಿಗೆ ಬುದ್ದಿಯೂ ಹೆಚ್ಚಿರುವುದರಿಂದ, ಅವನಿಗೆ ಮಾತ್ರ ಉನ್ನತ ಧ್ಯೇಯಗಳ ಪ್ರಜ್ಞೆಯಿರುತ್ತದೆ ಎಂಬುದು ಗಮನಾರ್ಹ. (೧:೧೩೧೫)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಐವತ್ತಕ್ಷರ ಕರ್ಮ Next