Previous ಬಲ್ಲಿರಾ ಬಲ್ಲಿದರೆ ಲೋಕ ಬಲ್ಲಿದನಾದ ಜ್ಯೋತಿ ಬೆಳುಗುತಿದೆ Next

ಗುರುಬಸವ ನಾ ನಿನ್ನ ಚರಣವನು ನಂಬಿರುವೆ

*

ಗುರುಬಸವ ನಾ ನಿನ್ನ ಚರಣವನು ನಂಬಿರುವೆ

ಗುರುಬಸವ ನಾ ನಿನ್ನ ಚರಣವನು ನಂಬಿರುವೆ
ನಿರುತವೂ ಕಾಯೊ ನೀ ಭಕ್ತಜನ ಬಂಧು!
ಕಾರುಣ್ಯ ನಿಧಿ ನೀನು ಭಕ್ತರಿಗೆ ಸುರಧೇನು
ವಾತ್ಸಲ್ಯ-ಮಮತೆಗಳ ಅಮೃತದ ಸಿಂಧು |

ಈ ಇಳೆಯ ಕತ್ತಲೆಯ ತೊಡೆಯಲೆಂದು ಬಂದೆ
ವಿಶ್ವಪ್ರೇಮದ ಬೆಳೆಸ ಬೆಳೆಯಲೈತಂದೆ |
ಇವನಾರು ಇವನಾರು ಎಂಬ ಭೇದವ ಜರಿದು
ಲೋಕವೆನ್ನದು ಎಂದ ವಿಶ್ವಧರ್ಮಿ |

ನಂಬಿದವರಿಗೆ ಇಂಬು ನಿನ್ನ ಹೃನ್ಮಂದಿರ
ಬಾಳ ಪಥಿಕನಿಗದುವೆ ಮಮತೆಯ ಹಂದರ |
ನಿನ್ನ ನಾಮಸ್ಮರಣೆ ಅತಿಮಧುರ ಹೆಚ್ಚೇನು
ಬನ್ನ ತೊಡೆಯುವ ನೀನು ದಿವ್ಯ ಗುರುಭಾನು |

ನಡೆವಾಗ ನುಡಿವಾಗ ಬಸವ ನಿನ್ನ ಸ್ಮರಣೆ
ಕೊಡುವಾಗ ಕೊಂಬಾಗ ತವ ನೆನಹಿನ ಪಾನ |
ಮಂತ್ರಮರುಷನೆ ನಿನ್ನ ಚರಣಾರವಿಂದ
ಸಚ್ಚಿದಾನಂದದ ನೆಲೆಯು ಮುಕ್ತಿಯ ಮನೆಯು

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

*
ಪರಿವಿಡಿ (index)
Previous ಬಲ್ಲಿರಾ ಬಲ್ಲಿದರೆ ಲೋಕ ಬಲ್ಲಿದನಾದ ಜ್ಯೋತಿ ಬೆಳುಗುತಿದೆ Next