ಚತುರ್ವಿಧ ಸಂಬಂಧಿ :👈 👉:ಇನ್ನೂರ ಹದಿನಾರುಸ್ಥಲ

ಇಪ್ಪತ್ತೈದು ತತ್ವಗಳು

ಇಪ್ಪತ್ತೈದು ತತ್ವಗಳು

ಸಾಂಖ್ಯಯೋಗ ದಾರ್ಶನಿಕರು ಇಪ್ಪತ್ತೈದು ತತ್ವಗಳೇ ಪ್ರಪಂಚದ ವಿವಿಧ ವಸ್ತುಗಳಾಗಿವೆ ಎಂದು ಪ್ರತಿಪಾದಿಸುತ್ತಾರೆ. ಇವೆಂದರೆ:

  • (೧ ರಿಂದ ೪) ಅಂತಃಕರಣ ಚತುಷ್ಟಯ ಅಥವಾ ಕರಣ ಚತುಷ್ಟಯ (ನಾಲ್ಕು ಅಂತಃಕರಣಗಳು): (೧) ಮೂಲಪ್ರಕೃತಿ ಅಥವಾ ಪ್ರಧಾನ ಅಥವಾ ಚಿತ್ತ; (೨) ಬುದ್ದಿ; (೩) ಮನಸ್ಸು: (೪) ಅಹಂಕಾರ;
  • (೫ ರಿಂದ ೯) ಐದು ಜ್ಞಾನೇಂದ್ರಿಯಗಳು; (೫) ಶ್ರೋತ್ರ, (೬) ತ್ವಕ್ (ತ್ವಕ್ಕು), (೭) ನೇತ್ರ, (೮) ಜಿಹ್ವೆ, (೯)ನಾಶಿಕ (ಘ್ರಾಣ) - ( ಶಬ್ದ ಸ್ಪರ್ಶ, ರೂಪ, ರಸ ಮತ್ತು ಗಂಧ ಎಂಬುವುಗಳ ಜ್ಞಾನವನ್ನುಂಟುಮಾಡಿಕೊಡುವ ಕಿವಿ, ಚರ್ಮ, ಕಣ್ಣು ನಾಲಿಗೆ ಮತ್ತು ಮೂಗು ಎಂಬ ಐದು ಇಂದ್ರಿಯಗಳು;)
  • (೧೦-೧೪) ಐದು ಕರ್ಮೇಂದ್ರಿಯಗಳು; (೧೦) ವಾಕ್, (೧೧) ಪಾಣಿ, (೧೨) ಪಾದ, (೧೩) ಗುಹ್ಯ, (೧೪)ಗುದ (ಪಾಯು)
  • (೧೫-೧೯) ಐದು ತನ್ಮಾತ್ರೆಗಳು ಅಥವಾ ಪವನೇಂದ್ರಿಯಗಳು: (ರೂಪರಸಾದಿ ಇಂದ್ರಿಯ ವಿಷಯಗಳು): (೧೫) ಪ್ರಾಣ, (೧೬) ಅಪಾನ, (೧೭) ವ್ಯಾನ, (೧೮) ಉದಾನ, (೧೯) ಸಮಾನ
  • (೨೦-೨೪) ಐದು ಮಹಾಭೂತಗಳು ಅಥವಾ ಪವನೇಂದ್ರಿಯಗಳು: (೨೦) ಪ್ರಾಣ, (೨೧) ಅಪಾನ, (೨೨) ವ್ಯಾನ, (೨೩) ಉದಾನ, (೨೪) ಸಮಾನ
  • ಹಾಗೂ (೨೫) ಪುರುಷ (ಅಥವಾ ಆತ್ಮ)

ಕರ್ಮಂದ್ರಿಯಗಳು: ಆತ್ಮನಿಗೆ ಕರ್ಮವನ್ನು ಮಾಡಲು ಬೇಕಾದ ಉಪಕರಣಗಳು: ಕರ್ಮೇಂದ್ರಿಯಗಳು ಆತ್ಮನ ಬಾಹ್ಯಕರಣಗಳೂ ಹೌದು. ಇವು ಐದು, ಯಾವುವೆಂದರೆ, ಕೈ, ಕಾಲು, ಜನನೇಂದ್ರಿಯ, ಗುದ ಮತ್ತು ವಾಕ್ಕು.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
ಚತುರ್ವಿಧ ಸಂಬಂಧಿ :👈 👉:ಇನ್ನೂರ ಹದಿನಾರುಸ್ಥಲ