ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ :👈 👉:ಎಲೆಗಾರ ಕಾಮಣ್ಣ

ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ

ಅಂಕಿತ: ನಿಜಗುಣೇಶ್ವರಲಿಂಗ

ಕಾಗೆಯ ನಾಯ ತಿಂದವರಿಲ್ಲದ
ವ್ರತಭ್ರಷ್ಟನ ಕೂಡಿದವರಿಲ್ಲ.
ನಾಯಿಗೆ ನಾರಂಗವಕ್ಕುವುದೆ ?
ಲೋಕದ ನರಂಗೆ ವ್ರತವಕ್ಕುವುದೆ ಶಿವಬೀಜಕಲ್ಲದೆ ?
ನೀವೇ ಸಾಕ್ಷಿ ನಿಜಗುಣೇಶ್ವರಲಿಂಗದಲ್ಲಿ.

ಚೋಳಮಂಡಲದ ಕಾಂಚಿನಗರದ ಎಡೆಮಠದ ನಾಗಿದೇವ ಈಕೆಯ ಪತಿ. ಆತನೋಡನೆ ಕಲ್ಯಾಣದಲ್ಲಿ ಬಂದು ನೆಲೆಸುತ್ತಾಳೆ. 'ನಿಜಗುಣೇಶ್ವರಲಿಂಗ' ಅ೦ಕಿತದಲ್ಲಿ ಈಕೆಯ ಕೇವಲ ಒಂದು ವಚನ ದೊರೆತಿದೆ. ಅದರಲ್ಲಿ ವ್ರತದ ಮಹತ್ವ, ವ್ರತಭ್ರಷ್ಠನ ನಿಂದೆ ವ್ಯಕ್ತವಾಗಿದೆ.

ಪರಿವಿಡಿ (index)
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ :👈 👉:ಎಲೆಗಾರ ಕಾಮಣ್ಣ